ಗುರುವಾರ, ಆಗಸ್ಟ್ 11, 2011

ಅತಿ ವಿಶೇಷ ಎನಿಸಿದ ಆ ಒಂದು ದಿನ!!


ಮಲಗಿದರೆ ಕುಂಭಕರ್ಣನಿಗೂ ಮೀರಿಸುವ ನಿದ್ದೆ ಮಾಡುವ ನನಗೆ ಈ ಶ್ರಾವಣ ಮಾಸದ ಶುಕ್ಲಪಕ್ಷದ ಶುಭ ಶುಕ್ರವಾರ ಶುರುವಾಗುವ ಮೊದಲನೇ ಕ್ಷಣ ಅಂದರೆ ೧೨.೦೦ ಗಂಟೆಗೆ ನನ್ನ ನಡೆಯುಲಿ ಹೊಡೆದು ಕೊಳ್ಳಲು ಶುರು ಮಾಡಿತಂತೆ! ಕೊನೆಗೂ ಸುಮಾರು ಅರ್ಧ ಗಂಟೆಗಳ ನಂತರ ಒಂದು ಕರೆಗೆ ಅರೆ ಬರೆ ನಿದ್ದೆಯಲ್ಲಿ ನನ್ನ ಕಿವಿ ಕೊಟ್ಟೆ, ಅತ್ತ ನನ್ನ ಸ್ನೇಹಿತನಿಂದ 'ಹುಟ್ಟು ಹಬ್ಬದ ಶುಭಾಶಯಗಳ' ಹಾರೈಕೆ !!! ನಿದ್ದೆಯಲ್ಲೇ ಧನ್ಯವಾದ ತಿಳಿಸಿದ ನಾನು ಮತ್ತೆ ಮರಳಿ ನಿದ್ರಾದೇವಿ ಮಡಿಲಿಗೆ!
ಅಂತು ಇಂತೂ ಬೆಳಗಾಯಿತು, ನಿದ್ರೆ ಕಳೆಯಿತು, ಹಾಗೆಯೇ ನನ್ನ ನಡೆಯುಲಿ ಮೇಲೆ ಕಣ್ಣಾಡಿಸಿದಾಗ ಕಂಡಿದ್ದು ಸುಮಾರು ೧೯ ತಪ್ಪಿದ ಕರೆಗಳು ಹಾಗು ಹಲವು ಸಂದೇಶಗಳು, ಯಾವ ಬೆಳಗು ನನಗೆ ಇಷ್ಟೊಂದು ಹೊತ್ತು ನಡೆಯುಲಿಯಲ್ಲಿ ಕಳೆಯಲು ಅವಕಾಶ ಕೊಟ್ಟಿರಿಲಿಲ್ಲ ಆದರೆ ಅಂದು ಎಲ್ಲ ಸಂದೇಶಗಳಿಗೆ ಉತ್ತರಿಸುತ್ತ, ಕರೆಗಳಿಗೆ ಕಿವಿಗೊಡುತ್ತಾ ನನಗೆ ಏನೋ ಒಂದು ವಿಶೇಷ ಅನುಭವ ನೀಡಿತು.
ನಿತ್ಯ ಕರ್ಮಗಳನ್ನು ಮುಗಿಸಿ, ತಯಾರಾಗಿ ಆಫೀಸ್ ಹೋದ ನನಗೆ ಸಹೋದ್ಯೋಗಿಗಳ ಸಿಹಿಯಾದ ಹಾರೈಕೆಗಳು, ಜೊತೆಗೆ ಸಿಹಿಗಾಗಿ ಕೋರಿಕೆಗಳು, ಅದಲ್ಲದೆ ನಾನು ನಿರೀಕ್ಷೆಯೇ ಮಾಡದಿದ್ದ ಸಂಧರ್ಭದಲ್ಲಿ ನನ್ನನ್ನು ಕರೆದು ಕೇಕ್ ಕತ್ತರಿಸುವ ಸಾಹಸಕ್ಕೆ ನನ್ನನ್ನು ದೂಡಿ ನನ್ನೊಂದಿಗೆ ಅವರೂ ಸಂಭ್ರಮಿಸಿದ್ದು.

ದಿನವೆಲ್ಲ ನನ್ನ ನಡೆಯುಲಿಗೆ ಎಂದು ಕೊದದ್ದಿಅಷ್ಟು ಕೆಲಸ ಅಂದು ಕೊಟ್ಟಿದ್ದೆ. ಬಹಳ ಅಪರೂಪಕ್ಕೆ ಅನ್ನುವಂತೆ ಕರೆ ಮಾಡಿದ ಸ್ನೇಹಿತರು, ಫೆಸೆಬುಕ್ ನಲ್ಲಿ ಶುಭಾಶಯಗಳ ಹೊಳೆಯನ್ನೇ ಹರಿಸಿದ ಗೆಳೆಯರು, ಮನೆಯವರು, ಹತ್ತಿರದ ನೆಂಟರ ಕರೆಗಳು ಹಾಗು ಹಾರೈಕೆಗಳು, ಕೆಲ ಗೆಳೆಯರ ಉಡುಗೊರೆಗಳು, ಮತ್ತೆ ಕೆಲವರ ಮುಖತಃ ಮಾತುಗಳು.... ಹೀಗೆ ಹೇಳಿದಷ್ಟು ಇರುವ ಕತೆಗಳು...ಇದೆಲ್ಲದರ ಜೊತೆಯಲ್ಲಿ ನನಗೆ ಆ ದಿನ ಬಹಳ ವಿಶೇಷ ಎನಿಸಿತು, ವರ್ಷಕ್ಕೆ ಒಮ್ಮೆಯಾದರು ಇಂತಹ ದಿನ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿ, ಬದುಕಲು ಹೊಸ ಚೈತನ್ಯ ನೀಡುತ್ತದೆ ಎಂದರೆ ಸುಳ್ಳಲ್ಲ.

ಈ ಸುಂದರ ಹುಟ್ಟಿದ ದಿನದ ಹುಟ್ಟಿಗೆ ಕಾರಣರಾದ ನನ್ನ ತಂದೆ ತಾಯಿಗೆ , ತಮ್ಮ 'ಶುಭ ಹಾರೈಕೆಗಳ ಮೂಲಕ' ದಿನಕ್ಕೆ ಮತ್ತಷ್ಟು ಮೆರಗು ತಂದ ಎಲ್ಲ ಬಂಧು ಮಿತ್ರರಿಗೆ ಅದೆಷ್ಟು ವಂದನೆ ಸಲ್ಲಿಸಿದರು ಕಡಿಮೆಯೇ... ಆದರು ಇದೋ ನನ್ನ ವಂದನೆಗಳು!!!

1 ಕಾಮೆಂಟ್‌: